ಉದ್ಯಾನನಗರಿಯಲ್ಲಿ ?ಅಂದರ್ ಬಾಹರ್ ಹಾಡು
Posted date: 31 Mon, Dec 2012 ? 04:41:46 PM

ಲೆಜೆಂಡ್ ಇಂಟರ್ ನ್ಯಾಷನಲ್ ಗ್ರೂಪ್ ಸಂಸ್ಥೆ ಮೂಲಕ  ರಜನೀಶ್, ಪ್ರಸಾದ್‌ರಾವ್, ಅಂಬರೀಶ್, ಭಾಸ್ಕರ್, ಅವಿನಾಶ್ ಅವರು ನಿರ್ಮಿಸುತ್ತಿರುವ ‘ಅಂದರ್ ಬಾಹರ್ ಚಿತ್ರಕ್ಕಾಗಿ ಎ.ಪಿ.ಅರ್ಜುನ್ ಬರೆದಿರುವ ‘ನನ್ನ ವಂಶ ರಾಜಂದು ಹೆಸರೊಂದು ಮುತ್ತಿಂದು ಈ ಗುಂಡಿಗೆ ಭಾರಿ ಗಟ್ಟಿ ಏನೇ ಬಂದ್ರು ಫ಼ಿಫ಼್ಟಿ ಫ಼ಿಫ಼್ಟಿ ಅಂದರ್ ಬಾಹರ್ ಅಂದರ್ ಬಾಹರ್ ಎಂಬ ಹಾಡಿನ ಚಿತ್ರೀಕರಣ ನಗರದ ಅಬ್ಬಾಯಿನಾಯ್ಡು  ಸ್ಟುಡಿಯೋ ಹಾಗೂ ಮೈಸೂರುಲ್ಯಾಂಪ್ಸ್‌ನಲ್ಲಿ ನಿರ್ಮಿಸಲಾಗಿದ್ದ ಐದು ವಿವಿಧ ಸೆಟ್‌ಗಳಲ್ಲಿ ನಡೆದಿದೆ. ಶಿವರಾಜಕುಮಾರ್ ಹಾಗೂ ವಿದೇಶಿ ನೃತ್ಯಗಾರರು ಈ ಹಾಡಿನ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.
     ಫಣೀಶ್ ಎಸ್ ರಾಮನಾಥಪುರ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರದ ನಾಯಕರಾಗಿ ಶಿವರಾಜಕುಮಾರ್ ಅಭಿನಯಿಸುತ್ತಿದ್ದಾರೆ. ಪಾರ್ವತಿ ಮೆನನ್ ಚಿತ್ರದ ನಾಯಕಿಯಾಗಿದ್ದಾರೆ. ಅರುಂಧತಿನಾಗ್, ಶ್ರೀನಾಥ್, ಶಶಿಕುಮಾರ್, ಸೃಜನ್‌ಲೋಕೇಶ್, ರಘುರಾಂ,  ಚಸ್ವ, ಸ್ಪೂರ್ತಿ  ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.
    ಆಸ್ಕರ್ ಪ್ರಶಸ್ತಿ ಪಡೆದ ಜೈಹೋ ಹಾಡಿನಲ್ಲಿ ಹಾಡಿದ್ದ ವಿಜಯಪ್ರಕಾಶ್ ಈ ಚಿತ್ರದ ಸಂಗೀತ ನಿರ್ದೇಶಕರು.  ಶೇಖರ್‌ಚಂದ್ರ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಎಂ.ಎಸ್.ರಮೇಶ್ ಸಂಭಾಷಣೆ ಬರೆದಿದ್ದಾರೆ. ಜೋ.ನಿ.ಹರ್ಷ ಸಂಕಲನ, ಥ್ರಿಲ್ಲರ್‌ಮಂಜು, ಪಳನಿರಾಜ್ ಸಾಹಸ ನಿರ್ದೇಶನ ಹಾಗೂ ಇಮ್ರಾನ್, ಹರ್ಷ, ಚಿನ್ನಿಪ್ರಕಾಶ್, ಪ್ರದೀಪ್ ಅಂತೋಣಿ ನೃತ್ಯ ನಿರ್ದೇಶನ  ‘ಅಂದರ್ ಬಾಹರ್‘ ಚಿತ್ರಕ್ಕಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed